ಚಂದ್ರದಶಾ ಚಂದ್ರಭುಕ್ತಿ (೦-೧೦-೦)
ವಿದ್ಯಾಸ್ತ್ರೀಗೀತವಾದ್ಯೇಷ್ವಭಿರತಿಶಮನಂ ಪಟ್ಟವಸ್ತ್ರಾದಿಸಿದ್ಧಿಂ
ಸತ್ಸಂಗಂ ದೇಹಸೌಖ್ಯಂ ನೃಪಸಚಿವಚಮೂನಾಯಕೈ:ಪೂಜ್ಯಮಾನಮ್ ।
ಸತ್ಕೀರ್ತಿಂ ತೀರ್ಥಯಾತ್ರಾಂ ವಿತರತಿ ಹಿಮಗುಃ ಪುತ್ರಮಿತ್ರೈ: ಪ್ರಿಯಂ ಚ
ಕ್ಷೋಣೀಗೋವಾಜಿಲಾಭಂ ಬಹುಜನವಿಭವಂ ಸ್ವೇದಶಾಂತರ್ವಿಪಾಕೇ।।
ಚಂದ್ರದಶಾ ಚಂದ್ರಭುಕ್ತಿಯಲ್ಲಿ ವಿದ್ಯಾಲಾಭ, ಸುಖ, ವಾದ್ಯಸಂಗೀತಾದಿ ಪ್ರೀತಿ, ಶಾಂತಿ, ವಿವಿಧ ಪಟ್ಟೆವಸ್ತ್ರಾದಿ ಲಾಭ, ಸಜ್ಜನಸಂಗ, ದೇಹಸುಖ, ರಾಜಮಂತ್ರಿ ಸೇನಾಧಿಪರಿಂದ ಸಂಪೂಜನೆ, ಸತ್ಕೀರ್ತಿ,ತೀರ್ಥಯಾತ್ರೆ , ಪುತ್ರಮಿತ್ರಾದಿಗಳಿಂದ ಪ್ರೀತಿ, ಭೂಮಿ, ಪಶು, ಕುದುರೆ ಇವುಗಳ ಲಾಭ, ಬಹುಜನ ಸನ್ಮಾನ, ಧನವೈಭವ ಇತ್ಯಾದಿ ಫಲವು. ಜಾ.ಪಾ.(ಫ.ದೀ – ಬ್ರಾಹ್ಮಣ ಸನ್ಮಾನ, ತಾಯಿಯಿಂದ ಸುಖ, ಸ್ತ್ರೀಜನಸುಖ, ಪ್ರಜಾ ಲಾಭಫಲವು. ಬೃ.ಪಾ. - ಚಂದ್ರನು ಉಚ್ಚ ಸ್ವಕ್ಷೇತ್ರಾದಿ ಇಷ್ಟಸ್ಥಾನಗಳಲ್ಲಿ ಕೇಂದ್ರ ತ್ರಿಕೋಣಾದಿ ಇಷ್ಟಭಾವಸ್ಥಿತಿ, ೯-೧೦ ಭಾವೇಶರ ಯುತಿ, ಹೀಗೆ ಪೂರ್ಣನಾಗಿಯೂ ಇದ್ದರೆ ರಾಜ್ಯಲಾಭ, ಪರಮಸುಖ, ಭಜನೆ, ಸತ್ಕೀರ್ತಿ, ಸೇನಾಪತಿತ್ವ , ದೇವತಾಭಕ್ತಿ , ಗುರುಭಕ್ತಿ , ಆನೆಕುದುರೆವಸ್ತ್ರಾದಿ ಸರ್ವಸಿದ್ದಿ ಸುಖಫಲವು. ಬಲಹೀನನಾಗಿ ಚಂದ್ರನು ಕ್ಷೀಣನಾಗಿ ಪಾಪಯುತನಾಗಿ ನೀಚಾದಿಯಲ್ಲಿ ೬-೧೨ರಲ್ಲೂ ಇದ್ದರೆ - ಧನಸ್ಥಾನಾದಿ ನಾಶ, ದೇಹಾಲಸ್ಯ , ಮನಸ್ತಾಪ, ರಾಜ ಮಂತ್ರಿ ವಿರೋಧ, ತಾಯಿಗೆ ಅರಿಷ್ಟ , ಬಂಧನ, ಮನೋದುಖ, ಬಂಧುನಾಶಫಲವು. ೮-೧೨ರ ಅಧಿಪರೊಡಗೂಡಿಯೋ ೨-೭ರ ಅಧಿಪನೋ ಆಗಿದ್ದರೆ - ರೋಗ, ಅಪಮೃತ್ಯುಭಯವು.) ಇದರಲ್ಲಿ ಕಷ್ಟಪರಿಹಾರಕ್ಕೆ- ದೇವೀ ಆರಾಧನೆ ಸುಪ್ತಶತೀ, ಚಂದ್ರಗ್ರಹ ಜಪ, ಪೂಜಾ, ಹೋಮ, ಮೃತ್ಯುಂಜಯ ಜಪ,ಪೂಜಾ,ಹೋಮ. ಚಂಡಿಕಾಪಾರಾಯಣ, ಲಲಿತಾರ್ಚನೆ, ದೀಪನಮಸ್ಕಾರ, ಕುಲದೇವತಾ ಸಂದರ್ಶನ ಇತ್ಯಾದಿ. ಲಕ್ಷ್ಮೀಹೃದಯ ಮಂತ್ರ ಹೋಮ.
ಚಂದ್ರದಶಾ ಕುಜಭುಕ್ತಿ (೦-೭-೦)
ರೋಗಂ ವಿರೋಧಬುದ್ಧಿಂ ಚ ಸ್ಥಾನನಾಶಂ ಧನಕ್ಷಯಮ್ ।
ಮಿತ್ರಭ್ರಾತೃವಶಾತ್ ಕ್ಲೇಶಂ ಚಂದ್ರಸ್ಯಾಂತರ್ಗತೇ ಕುಜೇ ।।
ಚಂದ್ರದಶಾ ಕುಜಭುಕ್ತಿಯಲ್ಲಿ - ರೋಗ, ವಿರೋಧ, ಬುದ್ಧಿನಾಶ, ಸ್ಥಾನನಷ್ಟ (ಗೃಹ, ಅಧಿಕಾರ, ಭೂಮಿ), ಧನವ್ಯಯ, ಮಿತ್ರರಿಂದ ಸಹೋದರರಿಂದ ದು:ಖ ಇತ್ಯಾದಿ ಫಲವು. ಜಾ.ಪಾ. ( ಫ.ದೀ. - ಪಿತ್ತ ಉಷ್ಣ ಅಗ್ನಿ ರಕ್ತ ಇವುಗಳಿಂದ ರೋಗ, ಶತ್ರುಚೋರಾದಿ ಭಯ, ವ್ಯಸನ, ದುಃಖ, ಧನಹಾನಿ, ಮಾನಹಾನಿಯು. ಬೃ ಪಾ - ಬಲಿಷ್ಠ ಕುಜನು ಲಗ್ನಾತ್ಕೇಂದ್ರ ತ್ರಿಕೋಣಗಳಲ್ಲಿದ್ದರೆ - ಸಂಪತ್ಸೌಭಾಗ್ಯಾದಿವೃದ್ಧಿ , ರಾಜಸನ್ಮಾನ, ವಸ್ತ್ರಾಭರಣ ಭೂಷಣಾದಿ ಲಾಭ, ಯತ್ನಕಾರ್ಯ ಸಿದ್ದಿ , ಗೃಹ, ಕೃಷಿಕ್ಷೇತ್ರಾದಿ ವೃದ್ಧಿ , ವ್ಯಾಪಾರ ಜಯಾದಿ ಫಲವು. ಉಚ್ಚ ಸ್ವಕ್ಷೇತ್ರಗಳಲ್ಲೂ ಇದ್ದರೆ– ಮಹಾಸೌಖ್ಯ , ಸರ್ವಸಿದ್ಧಿಯು. ಪಾಪಯುತ ಕುಜನು ೮-೧೨ರಲ್ಲಿದ್ದು ಚಂದ್ರನಿಂದಲೂ ಕೆಟ್ಟ ಸ್ಥಾನದಲ್ಲಿದ್ದರೆ ರೋಗಪೀಡೆ, ಗೃಹಹಾನಿ, ಕೃಷಿಹಾನಿ, ವ್ಯಾಪಾರನಷ್ಟ , ಕೆಲಸದವರಲ್ಲಿ ಕಲಹ, ನಿತ್ಯನಿಷ್ಠುರ ಮಾತು, ಹಾನಿ ಇತ್ಯಾದಿ. ೨-೭-೮ರ ಅಧಿಪನಾಗಿ ೮ ರಲ್ಲಿದ್ದರೆ- ಮಹಾ ಅನಿಷ್ಟದಾಯಕನು. ಅವಗಡಾದಿ ಸೂಚಕನು.) ಭುಕ್ತಿದೋಷ ಪರಿಹಾರಕ್ಕೆ- ಸಪ್ತಶತೀ ಪಾರಾಯಣ, ಚಂಡಿಕಾಹವನ, ದುರ್ಗಾಹೋಮವು, ತೊಗರಿದಾನ, ಅಂಗಾರಕಗ್ರಹ ಜಪ,ಪೂಜಾ,ಹವನ ಇತ್ಯಾದಿ ಪ್ರಾಯಶ್ಚಿತ್ತದಿಂದ ದೋಷಪರಿಹಾರವೆಂದಿದ್ದಾರೆ.
ಚಂದ್ರದಶಾ ರಾಹುಭುಕ್ತಿ (೧-೬-೦)
ರಿಪುರೋಗಭಯಾತ್ ಕ್ಲೇಶಂ ಬಂಧುನಾಶಂ ಧನಕ್ಷಯಮ್ ।
ನ ಕಿಂಚಿತ್ಸುಖಮಾಪ್ನೋತಿ ರಾಹೌ ಚಂದ್ರದಶಾಂತರೇ ।।
ಚಂದ್ರದಶಾ ರಾಹುಭುಕ್ತಿಯಲ್ಲಿ - ಶತ್ರುಭಯ, ರೋಗಪೀಡೆ, ದು:ಖ, ಬಂಧುನಾಶ, ಧನಹಾನಿ, ಸ್ವಲ್ಪವೂ ಸುಖವಿಲ್ಲದವನಾಗುತ್ತಾನೆ. ಜಾ.ಪಾ. (ಫ ದೀ- ವಾತರೋಗ, ಅನ್ನಪಾನಾದಿ ದೋಷದಿಂದ ಜ್ವರಾದಿ ಪೀಡೆ, ಶತ್ರುವೃದ್ಧ್ಯಾದಿ ಮಹಾ ದೋಷವು.) ಬೃ.ಪ.- ರಾಹು ಕೇಂದ್ರ ತ್ರಿಕೋಣಗಳಲ್ಲಿದ್ದರೆ- ಭುಕ್ತಿ ಆರಂಭದಲ್ಲಿ ಸುಖ ಸಿಕ್ಕಿದರೂ ಆಮೇಲೆ ಶತ್ರು , ಚೋರ, ಸರ್ಪ, ಪಶು, ಇತ್ಯಾದಿಯಿಂದ ಬಹುವಿಧದ ಆಪತ್ತು , ರಾಜಭಯ, ಬಂಧುಮಿತ್ರಾದಿ ನಾಶ, ಮಾನಹಾನಿ, ಮನೋವ್ಯಥೆ ಇತ್ಯಾದಿ. ರಾಹು - ೩-೬-೧೦-೧೧ರಲ್ಲಿ ಶುಭಯುತಿ ದೃಷ್ಟಿಯಲ್ಲಿದ್ದರೆ- ಯೋಗಕಾರಕನ ಸಂಬಂಧವಿದ್ದರೆ- ಸರ್ವಕಾರ್ಯ ಸಿದ್ಧಿ , ನೈಋತ್ಯ ಪಶ್ಚಿಮಭಾಗದಿಂದ ರಾಜ ಸನ್ಮಾನ, ವಾಹನಲಾಭ, ವಸ್ತ್ರಾದಿ ಭೂಷಣ ಪ್ರಾಪ್ತಿ , ಇಷ್ಟಕಾರ್ಯ ಸಿದ್ಧಿಯು. ಬಲಹೀನ ರಾಹು ಚಂದ್ರಾತ್ ೮-೧೨ರಲ್ಲಿದ್ದರೆ - ಸ್ಥಾನಭ್ರಂಶ, ಮನೋದು:ಖ, ಪುತ್ರದು:ಖ, ಮಹಾಭಯ, ಪತ್ನಿ ಪೀಡೆ, ರೋಗಪೀಡೆ, ಹಾವು ಚೇಳು ಮುಂತಾದ ಜಂತುಭಯ, ರಾಜಚೋರಾದಿ ಭೀತಿ, ಇತ್ಯಾದಿ. ಚಂದ್ರನ ಕೇಂದ್ರ ತ್ರಿಕೋಣ ೩-೧೧ರಲ್ಲಿ ರಾಹುವಿದ್ದರೆ - ತೀರ್ಥಯಾತ್ರೆ ಪುಣ್ಯಸಂಚಯ, ದೇವತಾ ಸಂದರ್ಶನ, ಧರ್ಮಪ್ರವೃತ್ತಿ ಇತ್ಯಾದಿ. ಬಲಹೀನ ರಾಹು ೨-೭ ರಲ್ಲಿದ್ದರೆ- ಭುಕ್ತಿಕಾಲದಲ್ಲಿ ದೇಹಾಪತ್ತು ಇದೆ. ದೋಷ ಪರಿಹಾರಕ್ಕೆ ನಾಗಪೂಜೆ ರಾಹುಜಪ,ಹೋಮ,ಸುವರ್ಣದಾನ, ಶತರುದ್ರಜಪಾಭಿಷೇಕ,ರುದ್ರಹೋಮ ಇತ್ಯಾದಿಯಿಂದ ದೋಷ ಪರಿಹಾರವು.
ಚಂದ್ರದಶಾ ಗುರುಭುಕ್ತಿ (೧-೪-೦)
ಯಾನಾದಿವಿವಿಧಾರ್ಥಾಪ್ತಿಂ ವಸ್ತ್ರಾಭರಣಸಂಪದಃ । ಯತ್ನಾತ್ಕಾರ್ಯಮವಾಪ್ನೋತಿ ಜೀವೇ ಚಂದ್ರದಶಾಂತರೇ ।।
ಚಂದ್ರದಶಾ ಗುರುಭುಕ್ತಿಯಲ್ಲಿ ವಿವಿಧ ರೀತಿಯಿಂದ ಅರ್ಥಲಾಭ, ವಾಹನಲಾಭ, ವಸ್ತ್ರಾಭರಣಾದಿ ಸಂಪತ್ಸಮೃದ್ಧಿ , ಯತ್ನ ಕಾರ್ಯ ಜಯ, ಜಾ.ಪಾ (ಫ.ದೀ – ದಾನಧರ್ಮ ಪ್ರವೃತ್ತಿ , ಸೌಖ್ಯ , ಭೂಷಣ, ಲಾಭ, ರಾಜಸನ್ಮಾನಫಲ),ಬೃ.ಪಾ – ಗುರುವು ಲಗ್ನಾತ್ಕೇಂದ್ರ ತ್ರಿಕೋಣ ಸ್ವಕ್ಷೇತ್ರ ಉಚ್ಚ ಲಾಭ ಇತ್ಯಾದಿ ರೀತಿಯಲ್ಲಿದ್ದರೆ- ಚಂದ್ರನಿಂದ ಇಷ್ಟಸ್ಥಾನದಲ್ಲೂ ಇದ್ದರೆ- ರಾಜ್ಯ ಲಾಭ, ನಿತ್ಯೋತ್ಸವ, ರಾಜಮೂಲಾದ್ಧನಾಗಮ, ಇಷ್ಟದೇವತಾನುಗ್ರಹ, ಸಂತಾನಸುಖ, ನಿತ್ಯ ಲಕ್ಷ್ಮೀಕಟಾಕ್ಷ ವೃದ್ಧಿ , ಮನೆಯಲ್ಲಿ ನಿತ್ಯೋತ್ಸವವು, ಭೂಮ್ಯಾದಿ ಸರ್ವ ವಿಧದ ಲಾಭ, ಗುರುವು ನೀಚಾಸ್ತಾದಿಯುತನಾಗಿ ೬-೮-೧೨ರಲ್ಲಿದ್ದು ಚಂದ್ರನಿಂದಲೂ ಅನಿಷ್ಟ ಸ್ಥಾನದಲ್ಲಿದ್ದರೆ- ಅಶುಭ ದರ್ಶನ, ಗುರುಜನ ಹಾನಿ, ಪುತ್ರಹಾನಿ, ಸ್ಥಾನಭ್ರಂಶ, ಮನೋದುಃಖ, ಅಕಸ್ಮಾತ್ಕಲಹ, ವಾಹನ, ಮನೆ, ಭೂಮ್ಯಾದಿ ನಾಶ. ಚಂದ್ರನಿಂದ ಗುರುವು ಕೇಂದ್ರತ್ರಿಕೋಣ ಲಾಭ ತೃತೀಯದಲ್ಲಿದ್ದರೆ- ಸರ್ವಸುಖ, ಸಂಪತ್ತು , ಧೈರ್ಯ, ಲಾಭ, ಪರಾಕ್ರಮ, ಯಜ್ಞ , ವ್ರತ, ವಿವಾಹ, ರಾಜ್ಯಶ್ರೀ ಸಿದ್ಧ್ಯಾದಿ ಫಲವು. ಚಂದ್ರನು ೬-೮-೧೨ರಲ್ಲಿದ್ದರೆ- ಬಲಹೀನ ಗುರುವಾಗಿದ್ದರೆ ಕೆಟ್ಟ ಸಂತಾನ, ಕೆಟ್ಟ ಭೋಜನ, ವಿದೇಶ ಸಂಚಾರ. ೨-೭ರ ಅಧಿಪನು ಗುರುವಾಗಿದ್ದರೆ- ಅಪಮೃತ್ಯು ಭಯವು. ಪರಿಹಾರಕ್ಕೆ - ಶಿವಸಹಸ್ರನಾಮ, ವಿಷ್ಣುಸಹಸ್ರನಾಮ ವೇದಾದಿ ಪಾರಾಯಣ, ಗುರುಜಪ, ವಿಷ್ಣುಪ್ರಾರ್ಥನೆ, ಸುವರ್ಣದಾನ ಇತ್ಯಾದಿಯು. ಒಬ್ಬರು ವೈಷ್ಣವ ಮಂತ್ರ ಹೋಮವೆಂದಿದ್ದಾರೆ.
ಚಂದ್ರದಶಾ ಶನಿಭುಕ್ತಿ (೧-೭-೦)
ಮಾತೃಪೀಡಾ ಮನೋದುಃಖಂ ವಾತಪೈತ್ಯಾದಿಪೀಡನಮ್ । ಸ್ತಬ್ಧವಾಗರಿಸಂವಾದಂ ಶನೌ ಚಂದ್ರದಶಾಂತರೇ ।।
ಚಂದ್ರದಶಾ ಶನಿಭುಕ್ತಿಯಲ್ಲಿ ತಾಯಿಗೆ ಕಷ್ಟ , ಮನೋದು:ಖ, ವಾತಪಿತ್ತ ದೋಷದಿಂದ ದೇಹ ಪೀಡೆ, ವಾಗ್ಬಂಧನ, ಶತ್ರುಕಲಹ ಜಾ.ಪಾ (ಫ.ದೀ – ವಿವಿಧ ರೋಗಗಳು, ದು:ಖಗಳು, ಬಂಧುಪುತ್ರ ಭಾರ್ಯಾದಿ ಪೀಡೆ, ದೊಡ್ಡದೊಡ್ಡ ವ್ಯಸನಕಾರಕ ಪ್ರಸಂಗಗಳು, ಮರಣಭಯಾದಿ ಫಲ.) ಬೃ.ಪಾ - ಶನಿಯು ಸ್ವ - ಉಚ್ಚ , ಸ್ವಾಂಶ, ಕೇಂದ್ರ , ತ್ರಿಕೋಣ, ಲಾಭ, ಶುಭಯುತಿದೃಷ್ಟಿ , ಇತ್ಯಾದಿಯಲ್ಲಿದ್ದರೆ- ಶೂದ್ರ ಪ್ರಭು, ಸಂಪಲ್ಲಾಭ, ಪುತ್ರಮಿತ್ರ ಅರ್ಥಾದಿಲಾಭ, ಕೃಷಿ ಆದಾಯ, ವ್ಯವಸಾಯ ಭೂಮ್ಯಾದಿ ವೃದ್ಧಿ , ರಾಜಾನುಗ್ರಹ, ವೈಭವ, ಕಲ್ಯಾಣ, ಪುತ್ರಲಾಭಾದಿ ಫಲವು. ಶನಿಯು ಬಲಹೀನನಾಗಿ ನೀಚಾದಿ ಸ್ಥಿತನಾಗಿ, -೬-೮-೧೨ರಲ್ಲಿದ್ದರೆ- ತೀರ್ಥಕ್ಷೇತ್ರಗಳ ಸಂಚಾರ ಅನೇಕ ಜನರಿಂದ ವಿವಿಧ ಕಷ್ಟ , ಶಸ್ತ್ರಭಯ, ಸರ್ವವಿಧದ ಆಪತ್ತು . ಚಂದ್ರನಿಂದ ಕೇಂದ್ರ ತ್ರಿಕೋಣಗಳಲ್ಲಿ ಶನಿ ಬಲಿಷ್ಠನಾಗಿದ್ದರೆ ಸ್ವಲ್ಪ ಧನಾದಿ ಸುಖವಿದ್ದರೂ ಮಡದಿ ಮಕ್ಕಳ ವಿರೋಧ ಬಂದೀತು. ೨-೮-೭ರಲ್ಲಿ ಶನಿ ಇದ್ದರೆ ದೇಹಾಪತ್ತು ಬರುವುದು, ದೋಷ ಪರಿಹಾರಕ್ಕೆ- ಮೃತ್ಯುಂಜಯ ಜಪ, ಶನಿಜಪ, ತ್ರಿಮೂರ್ತಿ ಪ್ರಾರ್ಥನೆ, ಗೋಸೇವೆ, ಕಪ್ಪುದನ ದಾನ, ಮೃತಸಂಜೀವಿನೀ ಜಪ ಇತ್ಯಾದಿ.
ಚಂದ್ರದಶಾ ಬುಧಭುಕ್ತಿ (೧-೫-೦)
ಮಾತೃವರ್ಗಾದ್ಧನಪ್ರಾಪ್ತಿಂ ವಿದ್ವಜ್ಜನಸಮಾಶ್ರಯಮ್।
ವಸ್ತ್ರಭೂಷಣಸಂಪ್ರಾಪ್ತಿಂ ಬುಧೇ ಚಂದ್ರದಶಾಂತರೇ ।।
ಚಂದ್ರದಶಾ ಬುಧಭುಕ್ತಿಯಲ್ಲಿ ಮಾತೃವರ್ಗದಿಂದ ಧನಪ್ರಾಪ್ತಿ , ವಿದ್ವಾಂಸರಲ್ಲಿ ಬೆರೆಯುವಿಕೆ,ವಸ್ತಾಲಂಕಾರ ಆಭರಣಾದಿ ಪ್ರಾಪ್ತಿಫಲವು. ಜಾ.ಪಾ.(ಫ.ದೀ. - ಧನಲಾಭ ಹಸ್ತ್ಯಶ್ವಾದಿಪಶುಲಾಭ, ಸೌಖ್ಯ , ಸಂಪತ್ಸಮೃದ್ಧಿ , ಬುದ್ಧಿವಿಕಾಸಾದಿ ಫಲವು.) ಬೃ.ಪಾ.- ಬುಧನು ಲಗ್ನಾತ್ ಕೇಂದ್ರ ತ್ರಿಕೋಣ ಲಾಭಾದಿಗಳಲ್ಲಿ ಉಚ್ಚ ಸ್ವಮಿತ್ರ ಕ್ಷೇತ್ರ , ಅಂಶಾದಿಯುತನಾಗಿ ಬಲಿಷ್ಠನಿದ್ದರೆ ವಿದ್ಯಾವಿನೋದಾದಿ ಸಭಾರಂಜನೆ, ರಾಜಮಾನ್ಯತೆ (ರಾಜಸಮಾನರು), ಧನ, ಅಲಂಕಾರ, ಜ್ಞಾನ, ಸಂತಾನ, ಸತ್ಸಂಗ ವ್ಯಾಪಾರ, ವಾಹನ, ಗೃಹ, ಇತ್ಯಾದಿ ಲಾಭ ವೃದ್ಧಿಯು. ಚಂದ್ರನಿಂದ ಕೇಂದ್ರ , ತ್ರಿಕೋಣ ೧೧-೨ ಇವುಗಳಲ್ಲಿದ್ದರೆ ವಿವಾಹಸಿದ್ದಿ , ಯಜ್ಞದೀಕ್ಷೆ , ದಾನಧರ್ಮ, ಶುಭಪ್ರವೃತ್ತಿ , ವಿದ್ವಜ್ಜನಮನ್ನಣೆ, ಉನ್ನತ ವ್ಯಕ್ತಿಗಳ ಪ್ರೀತಿ, ಆರೋಗ್ಯ , ಸೋಮಪಾನಾದಿ ಶುಭವು. ಬುಧನು ನೀಚಾದಿ ಬಲಹೀನನಾಗಿ ಚಂದ್ರನಿಂದ ೬-೮-೧೨ರಲ್ಲಿದ್ದರೆ ದೇಹಪೀಡೆ, ಕೃಷಿ ಪಶು ಭೂಮ್ಯಾದಿ ನಷ್ಟ , ಮಡದಿ ಮಕ್ಕಳ ಪೀಡೆ, ಕಾರಾಗೃಹ ಬಂಧನ, ಯೋಗಾದಿಗಳು. ಬುಧನು ೨-೭ರ ಅಧಿಪನಾಗಿದ್ದರೆ- ಜ್ವರಪೀಡಾದಿ ಮಹಾ ಭಯ ಪ್ರಸಂಗಗಳು, ಭುಕ್ತಿದೋಷ ಪರಿಹಾರಕ್ಕೆ - ಸುವರ್ಣ ರಜತ ದಾನ, ಧನ್ವಂತರೀ ಜಪ, ಪೂಜಾ, ಹೋಮ, ಬುಧಗ್ರಹಜಪ,ಪೂಜಾ,ಹೋಮ,ಚಂಡಿಕಾ ಪಾರಾಯಣ,ಆಯುಷ್ಯಹೋಮ,ಉದಕಶಾಂತಿ ಪಾರಾಯಣ.
ಚಂದ್ರದಶಾ ಕೇತುಭುಕ್ತಿ (೧-೭-೦)
ಸ್ತ್ರೀರೋಗಂ ಬಂಧುನಾಶಂ ಚ ಕುಕ್ಷಿರೋಗಾದಿಪೀಡನಮ್ । ದ್ರವ್ಯನಾಶಮವಾಪ್ನೋತಿ ಕೇತೌ ಚಂದ್ರದಶಾಂತರೇ ।।
ಚಂದ್ರದಶಾ ಕೇತುಭುಕ್ತಿಯಲ್ಲಿ - ಸ್ತ್ರೀ ಮೂಲಾತ್ ರೋಗ, ಬಂಧುನಾಶ, ಉದರರೋಗ ದ್ರವ್ಯನಾಶಾದಿ ಫಲವು. ಜಾ.ಪಾ. (ಫ.ದೀ – ಮನಶ್ಚಂಚಲ, ಧನವ್ಯಯ, ಜಲಭಯ, ಭೃತ್ಯಜನನಾಶ, ದಾನಶೂನ್ಯತೆಯು. ಬೃ.ಪಾ - ಕೇತು ಬಲಯುತನಾಗಿ ಇಷ್ಟಭಾವದಲ್ಲಿದ್ದರೆ- ಧನಲಾಭ, ಮಹಾಸೌಖ್ಯ , ಸ್ತ್ರೀಪುತ್ರಾದಿ ಸುಖ, ಭುಕ್ತಿಯ ಆದಿಯಲ್ಲಿ ಧನಹಾನಿ, ಮಧ್ಯೆ ಸುಖ, ಅಂತ್ಯ ಕಷ್ಟ , ಚಂದ್ರನ ಕೇಂದ್ರ ತ್ರಿಕೋಣದಲ್ಲಿ ಕೇತುವಿದ್ದರೆ- ಸೌಖ್ಯ , ಧನವೃದ್ಧಿ , ಗೋಮಹಿಷ್ಯಾದಿ ಲಾಭವು. ಚಂದ್ರನ ೮-೧೨-೬ರಲ್ಲಿ ಕೇತುವು ಪಾಪಯುತಿ ದೃಷ್ಟಿಯಲ್ಲಿದ್ದರೆ- ಶತ್ರುಗಳಿಂದ ಕಾರ್ಯಹಾನಿ, ಅಕಸ್ಮಾತ್ ಕಲಹ, ೨-೭ರಲ್ಲಿ ಕೇತುವಿದ್ದರೆ - ರೋಗಾದ್ಯನರ್ಥಗಳಿಂದ ಮಹಾಭಯವು. ಪ್ರಾಯಶ್ಚಿತ್ತ - ಗಣಪತಿ ಪೂಜೆ, ಹೋಮ, ಕೇತುಜಪ, ನೀಚಾನ್ನದಾನವು, ದೇವೀಪೂಜೆ.
ಚಂದ್ರದಶಾ ಶುಕ್ರಭುಕ್ತಿ (೧-೮-೦)
ಸ್ತ್ರೀಧನಂ ಕೃಷಿಪಶ್ವಾದಿಜಲವಸ್ತ್ರಾಗಮಂ ಸುಖಮ್ ।
ಮಾತೃರೋಗಮವಾಪ್ನೋತಿ ಭೃಗೌ ಚಂದ್ರದಶಾಂತರೇ ।।
ಚಂದ್ರದಶಾ ಶುಕ್ರಭುಕ್ತಿಯಲ್ಲಿ - ಸ್ತ್ರೀ ಮೂಲಾದ್ಧನ ಪ್ರಾಪ್ತಿ , ಕೃಷಿ, ಪಶು, ಜಲಾದಿಯಿಂದ ಲಾಭ, ವಸ್ತ್ರಾದಿ ಲಾಭ, ತಾಯಿಗೆ ರೋಗವು, ಜಾ.ಪಾ. (ಫ ದೀ - ನೌಕಾದಿಯಿಂದ ಲಾಭ, ಆಭರಣ, ಕೃಷಿ, ವ್ಯಾಪಾರಾದಿ ಲಾಭ, ಪುತ್ರಮಿತ್ರ ಪಶು ಧಾನ್ಯಾದಿ ವೃದ್ಧಿ.) ಬೃ.ಪಾ- ಬಲಿಷ್ಠ ಶುಕ್ರನು ಇಷ್ಟ ಸ್ಟಾನಸ್ಥಿತನಾಗಿದ್ದರೆ– ರಾಜಾಶ್ರಯ, ರಾಜ್ಯಲಾಭ, ವಾಹನ, ವಸ್ತ್ರ , ಅಲಂಕಾರ ಪ್ರಾಪ್ತಿ , ಪಶು, ವೃದ್ಧಿ , ಪಪುತ್ರಾದಿ ಸುಖ, ನೂತನ ಗೃಹ ನಿರ್ಮಾಣ, ಸುಗಂಧಪುಷ್ಪ ಮಾಲ್ಯಾದಿ ವೈಭವ, ಮೃಷ್ಟಾನ್ನಭೋಜನ, ಸ್ತ್ರೀಸುಖ, ಆರೋಗ್ಯ ಸಂಪದಭಿವೃದ್ಧಿಯು, ಚಂದ್ರ ಶುಕ್ರರು ಒಟ್ಟಿಗೆ ಇದ್ದರೆ ದೇಹಸುಖ, ಕೀರ್ತಿ ಸಂಪತ್ಸಮೃದ್ಧಿಯು, ಶುಕ್ರನು ನೀಚ ಅಸ್ತಾದಿ ಪಾಪಯುತಿದೃಷ್ಟನಾಗಿದ್ದರೆ- ಭೂಮಿ, ಸ್ತ್ರೀ , ಪುತ್ರ , ಭಾರ್ಯಾ, ಪಶು ಇತ್ಯಾದಿ ಹಾನಿ, ರಾಜವಿರೋಧವು. ದ್ವಿತೀಯದಲ್ಲಿ ಶುಕ್ರನು ಉಚ್ಛಾದಿ ಬಲಯುತನಿದ್ದರೆ- ನಿಧಿ ದ್ರವ್ಯ ಪ್ರಾಪ್ತಿ , ಭೂ, ಸಂತಾನ ಭಾಗ್ಯಾದಿ ವೃದ್ಧಿ . ದೇವ ಬ್ರಾಹ್ಮಣ ಭಕ್ತಿ , ಮುತ್ತುರತ್ನಾದಿ ಲಾಭ, ಚಂದ್ರನಿಂದ ೧೧ ರಲ್ಲಿ ಶುಕ್ರನಿದ್ದರೆ- ಕೇಂದ್ರ , ತ್ರಿಕೋಣದಲ್ಲಿ (ಚಂದ್ರನಿಂದ)ದ್ದರೆ- ಗೃಹ ಕ್ಷೇತ್ರಾದಿ ಸರ್ವಸಮೃದ್ಧಿ , ಮಹಾವೈಭವ ಜೀವನವು ಚಂದ್ರನಿಂದ ೬-೮-೧೨ರಲ್ಲಿ ಪಾಪಯುತಿ ದೃಷ್ಟಿಯಲ್ಲಿ ಶುಕ್ರನಿದ್ದರೆ - ವಿದೇಶವಾಸ, ದು:ಖ, ಚೋರಭಯ, ಮೃತ್ಯುಭಯ. ೨-೭ರ ಅಧಿಪನಾಗಿದ್ದರೆ ( ಶುಕ್ರನು ) ಅಪಮೃತ್ಯುಭಯವು. ಪ್ರಾಯಶ್ಚಿತ್ತ- ಶುಕ್ರಜಪ , ದುರ್ಗಾಹೋಮ, ಗೋದಾನ, ದೇವೀ ಆರಾಧನೆ, ಲಲಿತಾರಾಧನೆ, ಸಪ್ತಶತೀ, ಶ್ರೀಸೂಕ್ತ ಹೋಮ, ಸಪ್ತಶತೀ ಪಾರಾಯಣ,ಹವನ,ದೋಷದ ಪ್ರಾಬಲ್ಯ ದೌರ್ಬಲ್ಯ ನೋಡಿ ಪ್ರಾಯಶ್ಚಿತ್ತವು.
ಚಂದ್ರದಶಾ ರವಿಭುಕ್ತಿ (೦-೬-೦)
ನೃಪಪ್ರಾಯಕಮೈಶ್ಚರ್ಯಂ ವ್ಯಾಧಿನಾಶಂ ರಿಪುಕ್ಷಯಮ್ । ಸೌಖ್ಯಂ ಶುಭಮವಾಪ್ನೋತಿ ರವೌ ಚಂದ್ರದಶಾಂತರೇ ।।
ಚಂದ್ರದಶಾ ರವಿಭುಕ್ತಿಯಲ್ಲಿ ರಾಜನಿಂದ (ಸಮಾನರಿಂದ) ಐಶ್ವರ್ಯ ಪ್ರಾಪ್ತಿ , ರೋಗ ನಾಶ, ಶತ್ರುಕ್ಷಯ ಸೌಖ್ಯ , ಶುಭಾದಿ ಫಲವು, ಚಾ.ಪಾ (ಫ.ದೀ– ರಾಜನ ಸಮಾನತೆ, ಶೂರತನ, ವಾತಪಿತ್ತ ರೋಗಾದಿ ಫಲ.) ಬೃ.ಪಾ – ರವಿ ಉಚ್ಚಾದಿ ಬಲಯುತನಾಗಿ ಕೇಂದ್ರ ತ್ರಿಕೋಣಾದಿ ಇಷ್ಟಸ್ಥಾನದಲ್ಲಿದ್ದರೆ - ೨-೩ರಲ್ಲೂ ಇದ್ದರೆ ನಷ್ಟವಾದ ರಾಜ್ಯ ಧನಾದಿ ಲಾಭ, ಮನೆಯಲ್ಲಿ ಕಲ್ಯಾಣೋತ್ಸವ, ಮಿತ್ರರಿಂದ ರಾಜಸಮಾನರಿಂದ ಭೂಮ್ಯಾದಿ ಲಭ, ಪತ್ನಿಗೆ ಗರ್ಭಾಧಾನ, ಸಂಪತ್ಸಮೃದ್ಧಿ. ಭುಕ್ತಿ ಅಂತ್ಯದಲ್ಲಿ ಜ್ವರಾದಿ ಪೀಡೆ, ರವಿಯು ಚಂದ್ರನಿಂದ ೮-೧೨ರಲ್ಲಿದ್ದರೆ- ಪಾಪಯುತನಾಗಿ ೨-೭ರ ಅಧಿಪನಾಗಿದ್ದರೆ-ರಾಜ ಚೋರ ರೋಗಾದಿ ಭಯ, ವಿದೇಶಗಮನ, ನಿಷ್ಫಲತೆ, ಕಷ್ಟಫಲ. ಪ್ರಾಯಶ್ಚಿತ್ತ- ಶಿವಪೂಜೆ, ಶತರುದ್ರಾಭಿಷೇಕ,ರುದ್ರಹೋಮ,ದುರ್ಗಾಪೂಜೆ,ಹೋಮ, ಸೂರ್ಯನಮಸ್ಕಾರ, ಆದಿತ್ಯ ಜಪ, ದೀಪನಮಸ್ಕಾರ, ಇತ್ಯಾದಿ ಪ್ರಾಯಶ್ಚಿತ್ತದಿಂದ ಭುಕ್ತಿದೋಷ ಪರಿಹಾರವು.
Thanks for sharing....Marriage Hall in Ambattur
ReplyDeleteKalyana Mahal in Ambattur OT
Banquet Hall in Ambattur
This comment has been removed by the author.
ReplyDeleteDanken Sie für diese Informationen Wir sind Spezialist für Partnerrückführung liebeszauber, Partnerzusammenführung Liebeszauber, Starke Liebeszauber. Houngan Amadou ist einer der am besten gewirkten mächtigen Zaubersprüche. Er hat mehr als 30 Jahre Erfahrung.
ReplyDelete